ವನಸಿರಿ ಫೌಂಡೇಶನ್ ಸಂಯೋಗದಲ್ಲಿ
ಷ, ಬ್ರ, ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಈ ದಿನ ಸಮಾಜಸೇವಕರು ಚಲನಚಿತ್ರ ನಟರು ಶ್ರೀ ಸ್ವಾಮಿ ವಿವೇಕಾನಂದ ಯುವ ವೇದಿಕೆ ಗೌರವಾಧ್ಯಕ್ಷರಾದ ವೀರೇಶಗೌಡ ನೆಟಕಲ್ ಅವರು ತಮ್ಮ 45 ನೇಯ ಹುಟ್ಟುಹಬ್ಬವನ್ನು ಮೂಕ ಪಕ್ಷಿ ಪ್ರಾಣಿಗಳಿಗೆ ಗಿಡಗಳಿಗೆ ಮಣ್ಣಿನ ಮಡಿಕೆ ಗಿಡಗಳಿಗೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.
ನಂತರ ಕರಿಬಸವ ನಗರ ರಂಭಾಪುರಿ ಶಾಖಾಮಠ ಆವರಣದಲ್ಲಿರುವ ಗಿಡಗಳಿಗೆ ಹಾಗೂ ಶ್ರೀ ಆಂಜನೇಯ ದೇವಸ್ಥಾನ ಆವರಣದಲ್ಲಿರುವ ಗಿಡದ ಕೊಂಬೆಗಳಿಗೆ ಮಣ್ಣಿನ ಮಡಿಕೆ ಗಿಡಗಳಿಗೆ ಕಟ್ಟಿ ಪಕ್ಷಿಗಳಿಗೆ ದಾಹ ತೀರಿಸುವ ಕಾಯಕ ಮಾಡಲಾಯಿತು
ಈ ಸಂದರ್ಭದಲ್ಲಿ ಶ್ರೀ ಸೋಮನಾಥ ಶಿವಾಚಾರ್ಯರು, ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು , ಅಮರಯ್ಯ ಸ್ವಾಮಿ, ಮಲ್ಲಿಕಾರ್ಜುನ ಹತ್ತಿಗುಡ್ಡ, ನಗರಸಭೆ ಸದಸ್ಯರಾದ ಶರಣಪ್ಪ, ಸೋಮನಗೌಡ ಬಾದರ್ಲಿ, ವೀರೇಶಗೌಡ ನಟಕಲ್, ಶರಣೆಗೌಡ ಗೊರೆಬಾಳ, ಚಂದ್ರಶೇಖರ್ ಪವಾಡಶೆಟ್ಟಿ, ಪ್ರದೀಪ್ ಪೂಜಾರಿ, ಬುದೇಶ್ ಮರಾಠಿ, ರಾಜು ಬಳಗನೂರ್, ರಮೇಶ್ ಕುನ್ನಟಿಗಿ, ಶಂಕರಗೌಡ ತುರ್ವಿಹಾಳ್, ಹನುಮೇಶ್ ತುರುವಿಹಾಳ, ನಾಗರಾಜ ಹತ್ತಿಗುಡ್ಡ, ಇನ್ನು ಹಲವಾರು ಪಕ್ಷಿ ಪ್ರೇಮಿಗಳು ಭಾಗಿಯಾಗಿದ್ದರು.
ವರದಿ:ಅವಿನಾಶ ದೇಶಪಾಂಡೆ