ಅಧಿಕ ಜನ ಸೇರಿಸಿ ಮದುವೆ: ಕೋವಿಡ್ ನಿಯಮ ಉಲ್ಲಂಘನೆ : ಪ್ರಕರಣ ದಾಖಲು

0
119

ಧಾರವಾಡ.ಇಲ್ಲಿನ ಮಹಾನಗರಪಾಲಿಕೆ ವಲಯ 2 ರ ವ್ಯಾಪ್ತಿಯಲ್ಲಿಯ ರಾಯಲ್ ಕಮ್ಯುನಿಟಿ ಹಾಲ್‌ನಲ್ಲಿ ಇಂದು ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್,ಕಂದಾಯ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ಅರ್ಜಿದಾರರು ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ಭೀಮಪ್ಪ ಜಿ.ಬಾಂಬೆ ಎಂಬುವರು ಎಪ್ರೀಲ್ 20 ರಂದು ಅರ್ಜಿ ಸಲ್ಲಿಸಿ, ಅಂದು ಜಾರಿಯಲ್ಲಿದ್ದ ನಿಯಮಗಳ ಪ್ರಕಾರ 100 ಜನ ಅತಿಥಿಗಳನ್ನು ಆಹ್ವಾನಿಸಲು ಅನುಮತಿ ಪಡೆದಿದ್ದರು. ನಿನ್ನೆ ಏಪ್ರೀಲ್ 21 ರಿಂದ ಜಾರಿಗೊಂಡ ಹೊಸ ಮಾರ್ಗಸೂಚಿಗಳ ಪ್ರಕಾರ ಈ ಮಿತಿಯು 50 ಕ್ಕೆ ಸೀಮಿತವಾಗಿದೆ.

ಇಂದು ( ಏ.22) ರಂದು ಮಧ್ಯಾಹ್ನ ಧಾರವಾಡ ಶಹರ ಎಸಿಪಿ ಅನುಷಾ, ತಹಸೀಲ್ದಾರ್ ಡಾ.ಸಂತೋಷಕುಮಾರ್ ಬಿರಾದಾರ ಹಾಗೂ ಮಹಾನಗರಪಾಲಿಕೆ ಎರಡನೇ ವಲಯ ಅಧಿಕಾರಿ ಪಿಬಿಎಂ ಮಹೇಶ ಭೇಟಿ ನೀಡಿದಾಗ ಅಲ್ಲಿ 200 ಕ್ಕಿಂತ ಅಧಿಕ ಜನರು ನೆರೆದುದು ಕಂಡು ಬಂದಿತು. ಪಾಲಿಕೆಯ ಅಧಿಕಾರಿಗಳು ನೀಡಿದ ದೂರು ಆಧರಿಸಿ ಶಹರ ಪೊಲೀಸ್ ಠಾಣೆ ಅಧಿಕಾರಿಗಳು ಮದುವೆ ಮನೆಯ ಅರ್ಜಿದಾರರು ಹಾಗೂ ಕಲ್ಯಾಣಮಂಟಪದ ಸಂಘಟಕರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

ಜಿಲ್ಲೆಯ ಯಾವುದೇ ಒಳಾಂಗಣ ಸಭಾಂಗಣಗಳು ಅಥವಾ ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.ಈ ನಿಯಮ ಪಾಲನೆಯ ಕುರಿತು ನಿರಂತರ ಪರಿಶೀಲನೆ ನಡೆಯುತ್ತಿರುತ್ತದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ತಮ್ಮ ಸುತ್ತಲಿನ‌ ಪ್ರದೇಶಗಳಲ್ಲಿ ಇಂತಹ ಮದುವೆ ಸಮಾರಂಭಗಳು ಕಂಡು ಬಂದರೆ ಕಂದಾಯ,ಪೊಲೀಸ್ ಅಥವಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ‌.ಪಾಟೀಲ ಕೋರಿದ್ದಾರೆ.

LEAVE A REPLY

Please enter your comment!
Please enter your name here