ವರದಿ:-ರಾಜು ಪಾಳೆಗಾರ್
ಹಾಯ್ ಸಂಡೂರ್, ನ್ಯೂಸ್
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ನಿವಾಸಿಯಾಗಿದ್ದ ಶ್ರೀಯುತ ವೆಂಕಟೇಶ್ ಅವರು 19.07.2021 ರಂದು ಬೆಳಿಗ್ಗೆ 2 ಗಂಟೆಗೆ ಮೃತ ಪಟ್ಟಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಸಂಡೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು
ಮೃತ ವೆಂಕಟೇಶ್ ಅವರಿಗೆ ಪತ್ನಿ ಮತ್ತು ಮೂರು ಜನ ಗಂಡು ಮಕ್ಕಳಿದ್ದು,ಅಪಾರ ಬಂದು ಬಳಗ ಮತ್ತು ಮಿತ್ರರನ್ನು ಹೊಂದಿದ್ದಾರೆ
ಠಾಣೆಯಲ್ಲಿ ಸಿಬ್ಬಂದಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂದ ಮತ್ತು ಹೆಸರನ್ನು ಪಡೆದುಕೊಂಡಿದ್ದರು
ಮೃತ ವೆಂಕಟೇಶ್ ಅವರ ಅಂತ್ಯಕ್ರಿಯೆಯು ಸ್ವಗ್ರಾಮ ದೌಲತ್ ಪುರದಲ್ಲಿನ ಸಾರ್ವಜನಿಕ ರುದ್ರಭೂಮಿಯಲ್ಲಿ ಇಂದು ನಡೆಯಲಿದೆ
ಇಲಾಖೆಗಾಗಿ ಅವರು ಮಾಡಿದ ಸೇವೆ ಹಾಗೂ ಶ್ರಮವನ್ನು ಎಂದೂ ಮರೆಯಲು ಆಗೋಲ್ಲ, ಮೃತರ ಆತ್ಮಕ್ಕೆ ದೇವರು ಶಾಂತಿ ನೆಮ್ಮದಿ ನೀಡಲಿ ಅವರ ಕುಟುಂಬ ಸದಸ್ಯರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸ್ನೇಹಿತರು ಬಂಧುಗಳು ಸಂತಾಪ ವ್ಯಕ್ತಪಡಿಸಿದ್ದಾರೆ