ಕೂಡ್ಲಿಗಿ.ಜು.26:- ಕೂಡ್ಲಿಗಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರಂಗನಾಥ (58) ದಾವಣಗೆರೆಯ ಅವರ ವಾಸದ ಮನೆಯಲ್ಲಿ ನಿನ್ನೆ ರಾತ್ರಿ ತಲೆಗೆ ತಗುಲಿದ ಪಾರ್ಶ್ವವಾಯುನಿಂದ ಇಂದು ಬೆಳಿಗ್ಗೆ 10ಗಂಟೆ ಸುಮಾರಿಗೆ ನಿಧನರಾಗಿದ್ದರೆಂದು ಕಚೇರಿ ಮೂಲಗಳು ತಿಳಿಸಿವೆ.
ಅವರು ನಾಯಕನಹಟ್ಟಿ ಸಮೀಪದ ಗೌಡಗೇರಿ ಗ್ರಾಮದವರಾಗಿದ್ದು ಅವರ ಸತತ ಅರಣ್ಯ ಇಲಾಖೆಯ ಸೇವೆಯನ್ನು ವಲಯ ಅರಣ್ಯಾಧಿಕಾರಿಗಳಾಗಿ ಕೂಡ್ಲಿಗಿ, ಕೊಡಗು ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸಿ ಹಾಲಿ ಕೂಡ್ಲಿಗಿ ಉಪ-ವಿಭಾಗ ಅರಣ್ಯ ಸಂರಕ್ಷಾಧಿಕಾರಿಗಳಾಗಿದ್ದರು ಇವರು ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.