ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಿ, ವಿದ್ಯಾರ್ಥಿಗಳಿಂದ ಮನವಿ

0
98

ಕೂಡ್ಲಿಗಿ:ಡಿ:03:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ದಿನ ನಿತ್ಯ ಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ, ಆದರೆ ಇವರಿಗೆ ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲ, ಬೆಳಗಿನ ಜಾವ 9ಗಂಟೆಗೆ ಕಾಲೇಜ್ ಇರುವುದರಿಂದ, ಕಾನಹೊಸಹಳ್ಳಿಯಿಂದ ಚಿತ್ರದುರ್ಗಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ, 7.30 ಕ್ಕೆ ಬಸ್ಸಿನ ವ್ಯವಸ್ಥೆ ಇದ್ದರೆ ಮಾತ್ರ ಕಾಲೇಜಿಗೆ ಹೋಗಲು ಸಾಧ್ಯ, ಬೆಳಗ್ಗೆ 7.30 ಕ್ಕೆ ಐರಾವತ ಬಸ್ ಕಾನಹೊಸಹಳ್ಳಿಗೆ ಬರುತ್ತದೆ, ಆದರೆ ವಿದ್ಯಾರ್ಥಿಗಳ ಬಸ್ ಪಾಸ್ ಗೆ ಈ ಬಸ್ಸಿನಲ್ಲಿಅನುಮತಿ ಇರುವುದಿಲ್ಲ,

ಈ ಹಿಂದೆ ಸಂಡೂರು ಘಟಕದಿಂದ ಬಸ್ಸಿನ ಸೌಲಭ್ಯವಿತ್ತು, ಸರಿಯಾದ ಸಮಯಕ್ಕೆ ನಾವು ಚಿತ್ರದುರ್ಗಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಅ ಬಸ್ ಕೂಡ,ಬರುವುದಿಲ್ಲ. ಕಾರಣ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರು ಕೂಡ್ಲಿಗಿಯಿಂದ ಕಾನಹೊಸಹಳ್ಳಿಗೆ ಬೆಳಗ್ಗೆ,7-30-ಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡಿದರೆ, ಕಾನಹೊಸಹಳ್ಳಿ, ಹಾಲೂರು, ದೊಣ್ಣೆಹಳ್ಳಿ ಯಿಂದ ಕಾಲೇಜಿನ ಸಮಯ ಒಂಬತ್ತು ಗಂಟೆಗೆ ಸರಿಯಾಗಿ ಚಿತ್ರದುರ್ಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ, ಅನುಕೂಲವಾಗುತ್ತದೆ, ಆದ್ದರಿಂದ ಹೊಸಹಳ್ಳಿ,ಹಾಗು ಹಾಲೂರು, ಗ್ರಾಮದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿರುತ್ತಾರೆ.

ವರದಿ:-ಮಂಜುನಾಥ್ ಹೆಚ್

LEAVE A REPLY

Please enter your comment!
Please enter your name here