ಶಿವಮೊಗ್ಗ, ಡಿಸೆಂಬರ್ 06: ಕುವೆಂಪು ವಿಶ್ವವಿದ್ಯಾಲಯವು ಸಂಸ್ಕøತ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಉಮಾ ಜಡ್ಡಿಪಾಲ್ರವರು ಮಂಡಿಸಿದ “ಎ ಕ್ರಿಟಿಕಲ್ ಸ್ಟಡಿ ಆಫ್ ಶಿವಸಂಹಿತಾ” (A Critical Study of Shivasamhita) ಎಂಬ ಮಹಾಪ್ರಬಂಧಕ್ಕೆ ಪಿ.ಹೆಚ್ಡಿ ಪದವಿ ನೀಡಿ ಗೌರವಿಸಿದೆ.
ಶ್ರೀಮತಿ ಉಮಾ ಜಡ್ಡಿಪಾಲ್ರವರು ಸಹ್ಯಾದ್ರಿ ಕಲಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ|| ಸುಮಿತ್ರಾ ವಿ.ಭಟ್ರವರ ಮಾರ್ಗದರ್ಶನದಲ್ಲಿ ಎ ಕ್ರಿಟಿಕಲ್ ಸ್ಟಡಿ ಆಫ್ ಶಿವಸಂಹಿತಾ” ಸಂಶೋಧನಾ ಮಹಾಪ್ರಬಂಧ ಸಲ್ಲಿಸಿದ್ದರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ದಿವಂಗತ ಕೆ.ಆರ್. ನಾಗರಾಜ ಭಟ್ ಮತ್ತು ಶ್ರೀಮತಿ ಶರಾವತಮ್ಮನವರ ಮಗಳಾದ ಇವರು ಸಲ್ಲಿಸಿದ ಈ ಮಹಾಪ್ರಬಂಧವು ಯೋಗಚಿಕಿತ್ಸೆಯನ್ನು ವಿಶೇಷವಾಗಿ ಅರಿಯಲು ಸಹಾಯಕವಾಗಿದೆ.