ಗಂಗಾವತಿ ನಗರದ ಶ್ರೀ ಮಾರ್ಕಂಡೇಶ್ವರ ವೃತ್ತದಲ್ಲಿ ಶ್ರೀಮಾರ್ಕಂಡೇಶ್ವರ ಜಯಂತಿಯನ್ನು ಶ್ರೀ ಪದ್ಮಶಾಲಿ ಸಮಾಜದ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಸಮಾಜದ ಉಪಾಧ್ಯಕ್ಷರಾದ ಷಣ್ಮುಖಪ್ಪ ಚಿಲವೆರಿ ಮಾತನಾಡಿ ಶ್ರೀಮಾರ್ಕಂಡೇಶ್ವರ ಶರಣರು ಜಗತ್ತಿನ ಇತಿಹಾಸದಲ್ಲಿ ಮೃತ್ಯುವನ್ನು ಗೆದ್ದು ಚಿರಂಜೀವಿ ಆಗಿ ಬಾಳಿದ್ದಾರೆ, ಶ್ರೀ ಮಾರ್ಕಂಡೇಶ್ವರ ಕುಲದಲ್ಲಿ ಹುಟ್ಟಿದ ನಾವುಗಳು ಸ್ವಾಮಿಯನ್ನು ದಿನನಿತ್ಯ ಪೂಜೆ ಮಾಡುವುದರ ಮೂಲಕ, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮತ್ತು ಅವರ ಮಾರ್ಗದರ್ಶ ನದಲ್ಲಿ ನಾವು-ನೀವೆಲ್ಲರೂ ನಡೆದು ಕೊಳ್ಳಬೇಕೆಂದು ಸಮಾಜಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಪದ್ಮಶಾಲಿ ಸಮಾಜದ ಹಿರಿಯರಾದ ನಾಗಮುನಯ್ಯಾ ಅವ್ವರ, ವಿಠ್ಠಲ ಗಾಜಲ್, ಗೋಪಾಲ್ ಜಕ್ಕ, ಯಮನೂರಪ್ಪ ಸಿಂದೆ, ಲಕ್ಷ್ಮಣ ಬಡಗಲ್, ನೇಕಾರ ಸಂಜೀವಕುಮಾರ್, ಹನುಮಂತಪ್ಪ ಚಿಲಕ, ಬಸವರಾಜಪ್ಪ ಶಿಡ್ಲಘಟ್ಟ, ವೀರಣ್ಣ ಫುಲಪಾಟಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.