ದಾವಣಗೆರೆ ಏ.13 : ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ವತಿಯಿಂದ ಬುಧವಾರ ನಗರದ ಎ.ವಿ.ಕೆ ಕಾಲೇಜ್ ಹಿಂಬಾಗ ಬಾಪೂಜಿ ಶಾಲೆಯಲ್ಲಿ ವಸಂತ ಬೇಸಿಗೆ ಶಿಬಿರದಲ್ಲಿ ‘ಪತ್ರಕರ್ತರ ಜೊತೆ ಸಂವಾದ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ನ ಮಕ್ಕಳು ಬಹಳ ಆಸಕ್ತಿಯಿಂದ ಪಾಲ್ಗೊಂಡು ಪತ್ರಕರ್ತರೊಂದಿಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಸಂವಾದದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ನೇತಾಜಿ ಸ್ಕೌಟ್ ಗ್ರೂಪ್ನ ನಾಯಕರಾದ ಜೆ.ಎಸ್ ವಿಜಯ್, ಸಹಾಯಕರಾದ ಸುಶಿಲ. ಬಿ, ಚೇತನ ಗೈಡ್ ಗ್ರೂಪ್ನ ಮಧುಶ್ರೀ ಪಿ.ಹೆಚ್, ಶಿವಬಸಮ್ಮ ಇವರು ಹಾಜರಿದ್ದರು.