ಸಂಡೂರು:ಜೂನ್:26:-ತಾಲೂಕಿನ ದೋಣಿಮಲೈನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್.ಎಂ.ಡಿ.ಸಿ.ಯಲ್ಲಿ (ನ್ಯಾಷನಲ್ ಮಿನರಲ್ ದೇವಲಪಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಉದ್ಯೋಗ ಕೊಡಿಸುವುದಾಗಿ ಕೆಲವರು ಉದ್ಯೋಗಾಂಕ್ಷಿಗಳಿಂದ ಹಣ ಕೇಳುತ್ತಿರುವ ಅಂಶ ಗಮನಕ್ಕೆ ಬಂದಿದೆ. ಇಂತಹ ಮೊಸಗಾರರ ಜಾಲಕ್ಕೆ ಬೀಳದಂತೆ ಜನತೆ ಎಚ್ಚರಿಕೆಯಿಂದಿರಬೇಕು ಎಂದು ಎನ್.ಎಂ.ಡಿ.ಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್.ಎಂ.ಡಿ.ಸಿ ಸಂಸ್ಥೆ ಯಾವುದೇ ನೇಮಕಾತಿಯನ್ನು ಮಾಡಿಕೊಂಡರೂ, ಪಾರದರ್ಶಕವಾಗಿ ನಿಯಮಗಳಿಗನುಗುಣವಾಗಿ ಲಿಖಿತ, ಟ್ರೇಡ್ ಪರೀಕ್ಷೆಯ ಮೂಲಕ ಮಾಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಕೆಲಸ ಕೊಡಿಸಲು ಹಣ ಕೇಳುವ ವ್ಯಕ್ತಿಗಳು ಕಂಡು ಬಂದರೆ, ಅಂತಹವರ ವಿರುದ್ದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮತ್ತು ಎನ್.ಎಂ.ಡಿ.ಸಿ ಸಂಸ್ಥೆಯ ಅಧಿಕಾರಿಗಳಿಗೆ ಸಂಸ್ಥೆಯ ವೆಬ್ ಸೈಟ್ ಮೂಲಕ ದೂರು ನೀಡಬವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ