ಸರ್ಕಾರಿ ನೌಕರರಿಗೆ ಮುಂಗಡ ಹಣ ಹೆಚ್ಚಳಕ್ಕೆ ಸಂತಸ.

0
290

ಸಂಡೂರು:ಡಿ:15:-ಸರ್ಕಾರಿ ನೌಕರರಿಗಿದ್ದ ಹಬ್ಬದ ಮುಂಗಡ ಹಣ 25 ಸಾವಿರಕ್ಕೆ ಏರಿಕೆ ಮಾಡಿದ ಸರ್ಕಾರದ ನಿರ್ದಾರಕ್ಕೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ.ಪರಶುರಾಮ ಸಂಡೂರು ಇವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರಿ ನೌಕರರಿಗೆ ಹಬ್ಬಗಳ ಆಚರಣೆಗೆ ಈ ಮೊದಲು ಬಡ್ಡಿ ರಹಿತ 10 ಸಾವಿರ ಮುಂಗಡ ಹಣ ನೀಡಲಾಗುತ್ತಿತ್ತು. ನಮ್ಮ ರಾಜ್ಯಾಧ್ಯಕ್ಷರು ಇದನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಸ್ವೀಕರಿಸಿ ಆ ಮುಂಗಡ ಹಣವನ್ನು 25 ಸಾವಿರಕ್ಕೆ ಹೆಚ್ಚಿಸಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.

ಮುಂಗಡ ಹಣ ಹೆಚ್ಚಿಸುವಂತೆ ಮನವಿ ನೀಡಿದ್ದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಯವರಿಗೂ ಹಾಗೂ ನಮ್ಮ ಅಧ್ಯಕ್ಷರ ಮನವಿಗೆ ಮನ್ನಣೆ ನೀಡಿ ಮುಂಗಡ ಹಣ ಹೆಚ್ಚಳ ಮಾಡಿ ಆದೇಶ ನೀಡಿದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರಿಗೂ ತಾಲೂಕು ಸರ್ಕಾರಿ ನೌಕರರ ಸಂಘದ ಪರವಾಗಿ ಈ ಮೂಲಕ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here