ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪ್ ನಲ್ಲಿ ಇತ್ತೀಚೆಗೆ ಕಾಲುವೆ ಸ್ವಚ್ಛಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿದ್ದರು ಈಗ ಕುಡಿಯುವ ನೀರಿನ ಕೆರೆಯನ್ನು ಜನರ ಅನುಕೂಲಕ್ಕಾಗಿ ಸ್ವಚ್ಛತೆಯ ಕಾರ್ಯ ಮಾಡಲಾಯಿತು.
ತುಂಗಾಭದ್ರಾ ಕಾಲುವೆಯನ್ನು ಸ್ವಚ್ಚತೆ ಮಾಡಿ,ಈಗ ಜನರಿಗೆ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಕೆರೆ ಸ್ವಚ್ಚತೆಯನ್ನು ಹೊಸ್ಸಳ್ಳಿ ಇಜೆ ಕ್ಯಾಂಪ್ ನ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಗೂಡಿ ನಡೆಸಲಾಗಿದೆ ಎಂದು ಹೊಸ್ಸಳ್ಳಿ ಇಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ನಾಗಲಿಂಗಪ್ಪ ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯರು, ಕ್ಯಾಂಪಿನ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ
ಊರ್ಮಿಳಾ ಅಶೋಕ ನಲ್ಲ,
ಲಿಂಗಪ್ಪ G,ಜೇಮ್ಸ್ ಸೇರಿದಂತೆ ಹಲವರಿದ್ದರು.
ವರದಿ: ಅವಿನಾಶ ದೇಶಪಾಂಡೆ