ಸಿಂಧನೂರಿನ ಶ್ರೀ ಮಠ ಸೇವಾ ಟ್ರಸ್ಟ್ ವತಿಯಿಂದ ಕೋರೋನಾ ಹೋಗಲಾಡಿಸಲು ಜನಜಾಗೃತಿ ಮತ್ತು ಅರಿವು ಅಭಿಯಾನಕ್ಕೆ ಚಾಲನೆ

0
92

ಸಿಂಧನೂರಿನ ಶ್ರೀ ಮಠ ಸೇವಾ ಟ್ರಸ್ಟ್, ಕಾರುಣ್ಯ ನೆಲೆ ವೃದ್ಧಾಶ್ರಮದಿಂದ ಕೋರೋನಾ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ವಾಹನಕ್ಕೆ ಧ್ವನಿ ವರ್ಧಕ ಅಳವಡಿಸಿ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಆಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹಿರೇಮಠ ಹರೇಟನೂರು ಹೇಳಿದರು.

ಎರಡು ವರ್ಷಗಳಿಂದ ವೃದ್ದರ,ಅನಾಥರ, ದುರ್ಬಲರಿಗೆ ಊಟ, ಬಟ್ಟೆ,ವಸತಿ ನೀಡುತ್ತಾ ಸಾಮಾಜಿಕ ಜವಾಬ್ದಾರಿ ಹೊತ್ತಿರುವ ನಮ್ಮ ಆಶ್ರಮವು ಕಳೆದ ವರ್ಷದಂತೆ ಈ ವರ್ಷವೂ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜನಜಾಗೃತಿ ಸಂದೇಶವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here