ಸಿಂಧನೂರು ನಗರದ ಬಪ್ಪೂರ್ ರಸ್ತೆಯಲ್ಲಿ ವಾಸವಾಗಿರುವ ಮುಸ್ಲಿಂ ಬಡ ಕುಟುಂಬಸ್ಥರ ಮನೆಮನೆಗೆ ತೆರಳಿ ಮಹಿಳೆಯರಿಗೆ ಬಕ್ರೀದ್ ಹಬ್ಬದ ಅಂಗವಾಗಿ ಶ್ರೀ ದೀಕ್ಷಿತ್ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ ನಾಗವೇಣಿ ಎಸ್ ಪಾಟೀಲ್ ಸಿರೇಗಳನ್ನು ವಿತರಿಸಿದರು.
ನಂತರ ಮುಸ್ಲಿಂ ಬಾಂಧವರು ಪ್ರತಿವರ್ಷದಂತೆ ಈ ವರ್ಷ ಸಹ ಬಕ್ರೀದ್ ಹಬ್ಬದ ಅಂಗವಾಗಿ ಬೆಳಗಿನಿಂದಲೇ ಪ್ರಾರ್ಥನೆಗಳನ್ನು ದೇವರಿಗೆ ಸಲ್ಲಿಸುತ್ತಾ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸುವ ಸಮಯದಲ್ಲಿ ಭಾಗವಹಿಸಿ ಶುಭಕೋರಿದರು.
ವರದಿ: ಅವಿನಾಶ ದೇಶಪಾಂಡೆ