ಬಳ್ಳಾರಿ:ಸೆಪ್ಟೆಂಬರ್:02; ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ರವರು ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಕೌಲ್ ಬಜಾರ್ 28ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮುಬಿನಾ ಬೀ ರವರ ಸಮಕ್ಷಮದಲ್ಲೇ ಸುಮಾರು ವರ್ಷಗಳಿಂದ ಮನೆಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ನೀಡಲು ಭರವಸೆ ನೀಡಿದರು ಹಾಗೂ ಮಾನ್ಯ ಬಳ್ಳಾರಿ ತಾಲೂಕು ದಂಡಾಧಿಕಾರಿಗಳಾದ ರೆಹಮಾನ್ ಪಾಷಾ ಅವರಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಹಕ್ಕುಪತ್ರ ನೀಡಲು ಆದೇಶಿಸಿದರು
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ನಾಗರಾಜ್, ಗೋವರ್ಧನ್ ರೆಡ್ಡಿ , ಮೋಕಾ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಹಂಪಮ್ಮ ಗೋವಿಂದಪ್ಪ , ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಗಾದಿಲಿಂಗನಗೌಡ , ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎನ್.ಎಂ.ಡಿ ಆಸೀಫ್ ಭಾಷಾ , ಪಿ.ಶಶಿಕಲಾ ಜಗನ್ನಾಥ್, ಬಿ.ಆರ್.ಎಲ್ ಸೀನಾ, ಸೋಮು, ಉಮಾಪತಿ ರವರು, ನಾಗಲಕೆರೆ ಗೋವಿಂದ, ಕಾಂಗ್ರೆಸ್ ಮುಖಂಡರಾದ ಹಗರಿ ಗೋವಿಂದ, ವಿ.ಎನ್ ಶ್ರೀನಾಥ್ , ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಾರ್ಡಿನ ಮುಖಂಡರು ಉಪಸ್ಥಿತರಿದ್ದರು.
ವರದಿ:-ಮಹೇಶ್