ಬಳ್ಳಾರಿ:ಸೆ:15:-ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವತಿಯಿಂದ ಹಳ್ಳಿಗಳಿಂದ ನಗರಕ್ಕೆ ಕಾಲೇಜು ವಿದ್ಯಾರ್ಥಿಗಳು ಬರಲು ಸರಿಯಾದ ಸಮಯಕ್ಕೆ ಹಾಗೂ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದ್ದು ಪ್ರತಿದಿನ ಅವರು ನಗರಗಳಿಗೆ ಶಿಕ್ಷಣಕ್ಕಾಗಿ ಪದವಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ವಿದ್ಯಾರ್ಥಿಗಳು ಬಹಳಷ್ಟು ಸಾರಿ ಬಸ್ ಡಿಪೋ ಬಳ್ಳಾರಿ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದರು ಸಹ ಕಸದ ಡಬ್ಬಿಗೆ ಎಸೆದಂತಾಗಿದೆ ಆದ್ದರಿಂದ ಸರಿಯಾದ ಸಮಯಕ್ಕೆ ಅಂದರೆ ಮಾರ್ಗಗಳು ಎಂ ಸೂಗುರು, ಮುದನೂರು, ಸಿರಿಗೇರಿ,ಬೈಲೂರು ಹಾಗೂ ವಿವಿಧ ಹಳ್ಳಿಗಳಿಂದ ಬಳ್ಳಾರಿಗೆ ಬರಲು ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಕೂಡಲೇ ಮಾಡಬೇಕು ಎಂದು ತಮ್ಮಲ್ಲಿ ಮನವಿ ಮಾಡಲಾಯಿತು ಈ ಸಂದರ್ಭದಲ್ಲಿ ಹರೀಶ್ ಮಲ್ಲಿಕಾರ್ಜುನ ವಿನಯ್ ವಿನೋದ್ ಭೀಮಾ ಮುನ್ನ ಮತ್ತಿತರರಿದ್ದರು.