ಸಂಡೂರು ಪಟ್ಟಣದಲ್ಲಿ ಇಂದು ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು
ಸಂಡೂರು ಪಟ್ಟಣದ ಕಿರಾಣಿ ಅಂಗಡಿಗಳಾದ 1.ಅಲಿಯಾಜ್ ಅಂಗಡಿ.
2.ಮಾನಸ ಅಂಗಡಿ.
3.ಚಾಮುಂಡಿ ಅಂಗಡಿ, ಈ ಮೂರು ಕಿರಾಣಿ ಅಂಗಡಿಗಳಲ್ಲಿ ಅಯ್ಯಂಗಾರ್ ಕಂಪನಿಯ ಹೆಸರುಳ್ಳ ಸಣ್ಣ ಉಪ್ಪು ದೊರೆಯುತ್ತದೆ ಈ ಉಪ್ಪಿನಲ್ಲಿ ಉಸುಕಿನಂತ ಮರಳು ಮಿಶ್ರಿತ ವಸ್ತುವು ಕಲಬೆರಕೆ ಆಗಿರುತ್ತದೆ
ಇದರಿಂದ ಸಂಡೂರು ಪಟ್ಟಣದ ಹಾಗೂ ಈ ಕಿರಾಣಿ ಅಂಗಡಿಗಳಲ್ಲಿ ಉಪ್ಪನ್ನು ತೆಗೆದುಕೊಂಡು ಹೋಗುವ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದಕಾರಣ ತಾವುಗಳು ಅಯ್ಯಂಗಾರ್ ಕಂಪನಿಯ ವಿರುದ್ಧ ದೂರು ದಾಖಲು ಮಾಡಿ ಈಗಿರುವ ಉಪ್ಪನ್ನು ಮತ್ತು ಸದ್ಯ ಅಂಗಡಿಗಳಲ್ಲಿ ದಾಸ್ತಾನು ಮಾಡಿರುವ ಉಪ್ಪನ್ನು ವಶಪಡಿಸಿಕೊಂಡು ಮುಂದೆ ಆಗುವ ಅನಾವುತಗಳನ್ನು ತಪ್ಪಿಸಬೇಕೆಂದು ಮಾನ್ಯ ಸಂಡೂರು ತಹಶೀಲ್ದಾರ್ ಗೆ ದೂರನ್ನು ಸಲ್ಲಿಸಿದರು
ಈ ಸಂಧರ್ಭದಲ್ಲಿ ಕೆ.ಆರ್.ಕುಮಾರಸ್ವಾಮಿ, ವಿ.ಜೆ.ಶ್ರೀಪಾದಸ್ವಾಮಿ,ಪಿ.ಎಸ್.ಧರ್ಮಾ ನಾಯ್ಕ್,ಅವರುಗಳು ಇದ್ದರು