ಬಳ್ಳಾರಿ:ಡಿ:03ಇಂದು ಸೃಜನ ವಿದ್ಯಾರ್ಥಿ ವೇದಿಕೆ ವತಿಯಿಂದ ಸರಳಾದೇವಿ ಕಾಲೇಜಿನಲ್ಲಿ ನಮ್ಮದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಹುತಾತ್ಮರಾದ ಖುದಿರಾಮ್ ಬೋಸ್ ರವರ 133ನೇ ಜನ್ಮ ವಾರ್ಷಿಕ ದಿನವನ್ನು ಆಚರಿಸಲಾಯಿತು.
“ಯಾರು ಯಾವುದೇ ಪ್ರೋತ್ಸಾಹ ಸಿಗದಿದ್ದರೂ ದೇಶದ ಒಳಿತಿಗಾಗಿ ದುಡಿಯುತ್ತಾರೋ, ಅವರೇ ನಿಜವಾದ ದೇಶಪ್ರೇಮಿಗಳು”. -ಖುದಿರಾಮ್ ಬೋಸ್
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸೃಜನ ವಿದ್ಯಾರ್ಥಿ ವೇದಿಕೆಯ ಸದಸ್ಯರಾದ ನಿಹಾರಿಕಾ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೃಜನ ವಿದ್ಯಾರ್ಥಿ ವೇದಿಕೆಯ ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ್ ಕಂಬಳಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸೃಜನ ವಿದ್ಯಾರ್ಥಿ ವೇದಿಕೆಯ ಸದಸ್ಯರುಗಳಾದ ಸಿದ್ದು, ಲಕ್ಷ್ಮಿ, ನಾಗರತ್ನ, ಮೋಹನ್, ಸುನಿಲ್ ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:-ಮಹೇಶ್