ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕೆಲವು ಶಿಕ್ಷಕರು ಅವ್ಯವಹಾರಗಳಲ್ಲಿ, ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದ್ದು. ಅವರ ಬಗ್ಗೆ ಸೂಕ್ತ ತನಿಖೆ ಮಾಡಿ ಅಂತಹ ಅಶಿಸ್ಥಿನ ಶಿಕ್ಷಕರ ವಿರುದ್ಧ, ಕಾನೂನು ರೀತ್ಯ ಶಿಸ್ಥು ಕ್ರಮ ಕೈಗೊಳ್ಳುಬೇಕೆಂದು ಕರವೇ ಆಗ್ರಹಿಸಿದೆ.
ಸಂಬಂಧಿಸಿದಂತೆ ಏ 12ರಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು,ಅಧ್ಯಕ್ಷ ಕಾಟೇರ ಹಾಲೇಶ ನೇತೃತ್ವದಲ್ಲಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ, ಶಿಕ್ಷಣಾಧಿಕಾರಿ ಯುವರಾಜನಾಯಕರನ್ನು ಭೇಟಿ ಮಾಡಿ.ಅವರಿಗೆ ತಮ್ಮ ಹಕ್ಕೊತ್ತಾಯಗಳನ್ನು ಮನವರಿಕೆ ಮಾಡಿಕೊಟ್ಟಿದ್ದು, ತಮ್ಮ ದೂರನ್ನು ತಾಲೂಕ ಅಧ್ಯಕ್ಷ ಕಾಟೆರ್ ಹಾಲೇಶ ನೇತೃತ್ವದಲ್ಲಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಎಂ. ಓಬಳೇಶ, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಉಪಾಧ್ಯಕ್ಷ ಮಹಮದ್ ತೋಪಿಕ್, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಪ್ರಧಾನ ಕಾರ್ಯದರ್ಶಿ ಆರ್.ಎಂ.ಕಾಶಿನಾಥ್,
ನರಸಿಂಹ,ಬಣಕರ್ ವೀರಭದ್ರಪ್ಪ ಮರಬ, ಅಜ್ಜನ ಗೌಡ,ಉಕ್ಕಡದ ರಮೇಶ್,ಮಹೇಶ್ ಹೆಗ್ಡೆಳ್, ನಾಗಪ್ಪ,ಚಂದ್ರಪ್ಪ ,ಚಿಕ್ಕಪ್ಪ, ಕಾಟೆರ್ ಲಂಕೇಶ್,ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕಟೇರ್ ನಾಗರಾಜ್ ಇವರುಗಳು ಭಾಗವಹಿಸಿದ್ದರು.