ಸಿಂಧನೂರು ನಗರದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ನಂತರ ಶೋಷಿತರ ಧ್ವನಿಯಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಶ್ರೀ ಗುರುರಾಜ ಮುಕ್ಕುಂದಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬೇಡ್ಕರ್ ಮಹಾಸಭಾ (ರಿ) ಬೆಂಗಳೂರು ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ, ಹೊಸಳ್ಳಿ ಇಜೆ ಗ್ರಾಮಪಂಚಾಯತ್ ಅಧ್ಯಕ್ಷ ಎನ್ ನಾಗಲಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಜೇಮ್ಸ್, ಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮನೋಹರ್, ಹೊಸಳ್ಳಿ ಪಂಚಾಯಿತಿ ಸಿಬ್ಬಂದಿ ರಾಘವೇಂದ್ರ, ರಾಜು ಮಲ್ಲಿಕಾರ್ಜುನ, ಸಂಘಟಕರಾದ ಸುರೇಶ್ ಗೊರೆಬಾಳ, ನಾಗರಾಜ್ ಸಾಲಗುಂದ, ಕಾರ್ಯಕ್ರಮದಲ್ಲಿದ್ದರು.
ವರದಿ:ಅವಿನಾಶ್ ದೇಶಪಾಂಡೆ