ಅನುಚಿತ ವರ್ತನೆ ಪೊಲೀಸ್ ಪೇದೆ ಅಮಾನತು

0
1030

ವಿಜಯನಗರ/ಕೊಟ್ಟೂರು: ಮೇ:18:-ಕೊಟ್ಟೂರು ಪೋಲೀಸ್ ಠಾಣೆಯ ಪೇದೆ ಕೊಟ್ರಗೌಡ ಠಾಣೆ ಮೇಲಾಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಅಮಾನತು ಮಾಡಲಾಗಿದೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ರೀಪಿಂಗ್ ಸಭೆಯಲ್ಲಿ ಠಾಣಾಧಿಕಾರಿ ಆದೇಶವನ್ನು ಉಲ್ಲಂಘಿಸಿದ್ದರಲ್ಲದೆ. ಏಕವಚನದಲ್ಲಿ ಸಭೆಯಲ್ಲಿ ಠಾಣಾಧಿಕಾರಿಗೆ ಕೊಟ್ರಗೌಡ ಮಾತನಾಡಿದ್ದನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ವರದಿ ಕಳುಹಿಸಲಾಗಿತ್ತು.

ಈ ವರದಿ ಅನ್ವಯ ಎಸ್ಪಿ ಡಾ. ಕೆ.ಅರುಣ್ ಅವರು. ಕೊಟ್ರಗೌಡ ಅವರನ್ನು ಅಮಾನತು ಮಾಡಿ ಮಂಗಳವಾರ ಆದೇಶ ಮಾಡಿದ್ದಾರೆ.

ಅಕ್ರಮವಾಗಿ ಮರಳು ಸಾಗಾಣಿಕೆದಾರರ ಮೇಲೆ ನಿಗಾವಹಿಸುವಂತೆ ಠಾಣಾಧಿಕಾರಿಗೆ ಆದೇಶಿದ್ದರೂ ಪಾಲಿಸಿಲ್ಲ. ಅಲ್ಲದೆ ನಾನು ಲೋಕಲ್ ನೀವು ಪಿಎಸ್ ಐ ಆಗಿ ಹೇಗೆ ಕಾರ್ಯನಿರ್ವಹಿಸುತ್ತೀರಿ. ನಿಮ್ಮನ್ನು ಇಲ್ಲಿಂಗ ವರ್ಗಮಾಡಿಸಿಯೇ ಮಾಡಿಸುತ್ತೇನೆ ಎಂದು ದುರ್ವತನೆ ಮಾಡಿದ್ದನ್ನು ಎಸ್ಪಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಪಟ್ಟಣದಲ್ಲಿ ಕೆಲವರಿಗೆ ಅಕ್ರಮ ಚಟುವಟಿಕೆ ಮಾಡಲು ಕುಮ್ಮಕ್ಕು ನೀಡಿದ್ದನ್ನು ಎಸ್ಪಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಪೇದೆ ಕೊಟ್ರಗೌಡ ಅವರನ್ನು ಎಸ್ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here