ಕೊಟ್ಟೂರು:ಜೂನ್:01:- ಪಟ್ಟಣದ ಪೋಲೀಸ್ ಠಾಣೆಯಲ್ಲಿ ಸುಮಾರು 10-12 ವರ್ಷಗಳಿಂದ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ್ ರಾವ್ ಮಂಗಳವಾರ ನಿವೃತ್ತಿಯಾದರು. ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದ ಪಿ.ಎಸ್.ಐ. ವಿಜಯಕೃಷ್ಣ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿರುವುದು ಆಶ್ಚರ್ಯಕರ ಎಂದರು. ಅವರ ತಾಳ್ಮೆ ಅನುಕರಣೀಯ ಮತ್ತು ನಮ್ಮ ಪೀಳಿಗೆಗೆ ಮಾದರಿ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಕೇಂದ್ರಬಿಂದುವಾದ ವಸಂತರಾವ್ ಮಾತನಾಡಿ, ಪೋಲೀಸ್ ಇಲಾಖೆಯಲ್ಲಿ ಸುದೀರ್ಘ 34 ವರ್ಷಗಳ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ಇಲಾಖೆಗೆ, ಕೊಟ್ಟೂರಿಗೆ ನಾನೆಂದಿಗೂ ಋಣಿಯಾಗಿರುತ್ತೇನೆ. ಕ್ಷೇತ್ರನಾಥ ಶ್ರೀ ಗುರು ಕೊಟ್ಟೂರೇಶ್ವರನನ್ನು ನೆನೆದರು. ಹಾಗೂ ಪೋಲೀಸ್ ಇಲಾಖೆಯ ಕೆಲಸ ಬಹಳ ಕಷ್ಟದ ಕೆಲಸವಾಗಿದ್ದು, ಈ ಯಶಸ್ಸಿನ ಹಿಂದೆ ಪೋಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳ ಸಹಕಾರವಿತ್ತು ಎಂದು ಸಿಬ್ಬಂದಿಗಳನ್ನು ಕೊಂಡಾಡಿದರು. ಕೊಟ್ಟೂರಿನ ಪತ್ರಕರ್ತರಾದ ದೇವರಮನಿ ಸುರೇಶ್ ಮಾತನಾಡುತ್ತಾ, ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಶಿಸಿದರು. ಈ ಸಂದರ್ಭದಲ್ಲಿ ವಸಂತರಾವ್ ಅವರ ಕುಟುಂಬ ಸದಸ್ಯರು, ಪೋಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಯವರು, ಪತ್ರಿಕಾ ಮಾಧ್ಯಮದವರು ಹಾಜರಿದ್ದರು.
ವರದಿ: ಶಿವರಾಜ್ ಕನ್ನಡಿಗ