ಉತ್ತಮ ಆರೋಗ್ಯವನ್ನು ಸಿರಿಧಾನ್ಯಗಳು ತರಕಾರಿ ಹಾಗೂ ಹಣ್ಣು ಹಂಪಲುಗಳ ಸೇವನೆಯಿಂದ ಪಡೆದುಕೊಳ್ಳಲು ಸಾಧ್ಯ: ಸಿಡಿಪಿಓ ಪ್ರೇಮಮೂರ್ತಿ

0
295

ಸಂಡೂರು:ಸೆ:27:-ರಾಷ್ಟ್ರೀಯ ಪೋಷಣೆ ಅಭಿಯಾನ ಯೋಜನೆಯಡಿಯಲ್ಲಿ ಪೋಷಣೆ ಮಾಸಾಚರಣೆ 2021ರ ಪ್ರಯುಕ್ತ ಸಂಡೂರು ತಾಲೂಕಿನ ಚೋರನೂರು ವಲಯದ 27 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಸೇರಿ ಚೋರನೂರು ಗ್ರಾಮದಲ್ಲಿ ಪೌಷ್ಟಿಕ ಶಿಬಿರ, ಅನ್ನಪ್ರಾಸನ ಕಾರ್ಯಕ್ರಮ ಹಾಗೂ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಡಿಪಿಓ ಪ್ರೇಮ್ ಮೂರ್ತಿ ಕೆ. ಅವರು ದೇಶದಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ರಾಷ್ಟ್ರೀಯ ಪೋಷಣೆ ಅಭಿಯಾನ ಯೋಜನೆ ಜಾರಿಗೆ ಬಂದಿದೆ. ಸದರಿ ಯೋಜನೆಯಂತೆ ಅಪೌಷ್ಟಿಕತೆ ಹೋಗಲಾಡಿಸಲು ಎಲ್ಲರೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸ್ಥಳೀಯವಾಗಿ ಸಿಗುವ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು ಜೊತೆಗೆ ತರಕಾರಿ ಹಣ್ಣುಹಂಪಲ ಸೇವನೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು ಹಾಗೂ ಮಹಿಳೆಯರಿಗಾಗಿ ಇರುವ ಇಲಾಖೆಯ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಲು ತಿಳಿಸಿದರು.

ವಲಯದ ಮೇಲ್ವಿಚಾರಕರಾದ ಎ ಪಿ ಕುಂಬಾರ್ ಅವರು ಮಾತನಾಡಿ ಒಬ್ಬ ತಾಯಿ ಮಗುವಿನ ಲಾಲನೆ ಪಾಲನೆ ಮಾಡುವುದರ ಮೂಲಕ ಪೌಷ್ಟಿಕವಾದ ಮಗುವನ್ನು ದೇಶಕ್ಕೆ ಕೊಡುಗೆಯಾಗಿ ನೀಡುವುದಕ್ಕೆ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಲಿತ ಮಾರೆಪ್ಪ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಜಗದೀಶ್, ಆರಕ್ಷಕ ಠಾಣೆಯ ಅಧಿಕಾರಿ ಚಂದ್ರಶೇಖರ್, ಹಾಗೂ ಮೇಲ್ವಿಚಾರಕಿಯರಾದ ಎಂ ಎಂ ಭಜಂತ್ರಿ, ಶರಣಬಸವೇಶ್ವರಿ, ಶಾರದಾ ಸಿಂಧೆ, ಚೇತನ್ ಗೌಡ್ರು ಹಾಗೂ ತಾಲೂಕು ಪೋಷಣ ಅಭಿಯಾನದ ಸಂಯೋಜಕರಾದ ಗಂಗಾಧರ್, ಆರೋಗ್ಯ ಇಲಾಖೆಯ ಶಿಲ್ಪ, ಮತ್ತು ಲಕ್ಷ್ಮಿಹಾಗೂ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಚೋರನೂರು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತರು-ಸಹಾಯಕಿಯರು ಹಾಗೂ ಗರ್ಭಿಣಿಯರು-ಬಾಣಂತಿಯರು ಮತ್ತು ಮಕ್ಕಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

LEAVE A REPLY

Please enter your comment!
Please enter your name here