ಸಂಡೂರು:ಸೆ:28:- ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ (ರಿ) ಕುರೇಕುಪ್ಪ ಘಟಕ ವತಿಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 115ನೇ ಜನ್ಮದಿನ ಆಚರಣೆ
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ.ದೇವಣ್ಣ ಮಾತನಾಡಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸಾರ್ವಭೌಮತೆ ಏಕತೆ ಸಮಗ್ರತೆ ಸೌಹಾರ್ದತೆ ಕಾಪಾಡಲು ಕಂಕಣಬದ್ಧರಾಗಬೇಕು ಹಾಗೂ ಭಗತ್ ಸಿಂಗ್ ಸ್ವಾತಂತ್ರದ ಕಿಚ್ಚು ಹಚ್ಚಿದರು ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ ಸಿಕ್ಕರೆ ಸಾಲದು ಸಮಾಜವಾದಿ ಭಾರತ ನಿರ್ಮಾಣವಾಗಬೇಕು ಎಂಬ ಕನಸು ಕಂಡರು ಈ ಹೋರಾಟಕ್ಕೆ ಹೆದರಿದ ಬ್ರಿಟಿಷರು ಅವರ 23ನೇ ವಯಸ್ಸಿಗೆ ಗಲ್ಲಿಗೇರಿಸಿದರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಕೆ ಸಿದ್ದಪ್ಪ,ಕೆ ದೇವಣ್ಣ, ಕೆ ಸತ್ಯಣ್ಣ. ವಿ. ಹೊನ್ನೂರಪ್ಪ,ಕೆ ಜಗನ್ನಾಥ್ ಆಚಾರಿ ಕೆ, ಹೊನ್ನೂರಪ್ಪ, ಕೆ ಹಾಲೇಶ್, ಶಿವಕುಮಾರ್ ಎಚ್ ಕೆ ಬಸವರಾಜ, ರೈತ ಸಂಘಟನೆಯ ಜಿ ಪಂಪನಗೌಡ, ಯು.ಶರಭಯ್ಯ,ಪಿಕೆ ಜಡೆಯಪ್ಪ, ಏನ್.ಅಂಬಣ್ಣ, ಏನ್ ತಿಪ್ಪೇಸ್ವಾಮಿ, ಹೆಚ್. ರಂಗರೆಡ್ಡಿ ಏನ್. ಚಿದಾನಂದಪ್ಪಾ, ಮೌನಚಾರಿ ಹಾಗೂ ಹಿರಿಯರು ಇದ್ದರು. ವಂದೆನೆಗಳು… ವಿ ದೇವಣ್ಣ ಜಿಲ್ಲಾ ಉಪಾಧ್ಯಕ್ಷರು CWFI ನಡೆಸಿಕೊಟ್ಟರು