ಮೈಸೂರು:ಪೆ:07:-ಶ್ರೀಯುತ ಪುಟ್ಟಸ್ವಾಮಿ ಗುರುಗಳು ಲೋಕವನ್ನು ತ್ಯಜಿಸಿದ್ದಾರೆ ಶ್ರೀಯುತರು ಮೈಸೂರು ಜಿಲ್ಲೆಯ
ಟಿ.ನರಸೀಪುರ ತಾಲೂಕಿನ ತಲಕಾಡು ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಫೆಬ್ರವರಿ 6ರಂದು ಸಾವನ್ನಪ್ಪಿದ್ದಾರೆ ಇವರ ಸೇವೆ ಅವಿಸ್ಮರಣೀಯ ಬಾಲಕಿಯರ ಪ್ರೌಢಶಾಲೆಗೆ ಸ್ವಂತವಾಗಿ ಒಂದು ಕೊಠಡಿಯನ್ನು ಕಟ್ಟಿಸಿ ಕೊಟ್ಟಿದ್ದಾರೆ ಪ್ರತಿ ವರ್ಷ ಹೊಸದಾಗಿ ಸೇರುವ ಮಕ್ಕಳಿಗೆ ಎರಡು ಜೊತೆ ಶಾಲೆಯ ಸಮವಸ್ತ್ರವನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದರು ಯಾವುದೇ ರಾಷ್ಟ್ರೀಯ ಹಬ್ಬಗಳು ಬಂದರೆ ತಮ್ಮ ಸ್ವಂತ ಖರ್ಚಿನಿಂದ ಲಾಡು-ಮೈಸೂರ್ ಪಾಕ್ ಮಕ್ಕಳಿಗೆ ಇಷ್ಟವಾದ ಅಡಿಗೆಯನ್ನು ಮಾಡಿಸಿ ಮಕ್ಕಳನ್ನು ದೇವರು ತರಹ ಕಾಣುತ್ತಿದ್ದರು
ಟಿ.ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಎಲ್ಲಾ ಶಿಕ್ಷಕರನ್ನು ಗೌರವದಿಂದ ಕಾಣುತ್ತಿದ್ದರು ಸಂಸ್ಥೆಗೆ ತನ್ನದೇ ಆದಂತಹ ಕೊಡುಗೆಯನ್ನು ಕೊಟ್ಟಿದ್ದಾರೆ ಇಂಥ ಶಿಕ್ಷಕರನ್ನು ಕಳೆದುಕೊಂಡು ಮಕ್ಕಳ ಅ ರೋದನೆ ಮುಗಿಲಮುಟ್ಟಿತ್ತು ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಎಲ್ಲಾ ಶಿಕ್ಷಕರು ಸಾಂತ್ವನ ಹೇಳಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ಇವರು ಧ್ರುವತಾರೆ ಇದ್ದಂತೆ
ವರದಿ:-
ನಂದೀಶ್ ನಾಯಕ
ಹಾಯ್ ಸಂಡೂರ್, ಪತ್ರಿಕೆ