ಸಂಡೂರು:ಸೆ:08:ತೋರಣಗಲ್ಲು:-
ತುರ್ತು ಔಷಧಗಳನ್ನು ಖರೀದಿ ಮಾಡಿ ತಾಲೂಕು ಪಂಚಾಯತಿ ಇ.ಒ ವಿವೇಕಾನಂದ್ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಹೇಳಿದರು,
ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿತ್ತು, ಸಭೆಯಲ್ಲಿ ಕಳೆದ 2020-21 ನೇ ವರ್ಷ ಬಿಡುಗಡೆಯಾದ ಅನುದಾನ ಖರ್ಚು ಮಾಡಿದ ಲೆಕ್ಕದ ವಿವರವನ್ನು ಮಂಡಿಸಲಾಯಿತು, ನಂತರ 2021-22 ರ ಅನುದಾನ ಬಳಕೆಗೆ ಮುಂಗಡ ಅಂದಾಜು ವೆಚ್ಚದ ವರದಿಯನ್ನು ಮಂಡಿಸಲಾಯಿತು,
ಸಭೆಯಲ್ಲಿ ತಾಲೂಕು ಪಂಚಾಯತಿ ಇ.ಒ ವಿವೇಕಾನಂದ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆಗೆ ಬೇಕಾದ ತುರ್ತು ಔಷಧಗಳನ್ನು ತಕ್ಷಣ ಖರೀದಿ ಮಾಡಲು ಸೂಚಿಸಿದರು,ತಾತ್ಕಾಲಿಕ ನೇಮಕಾತಿಯಲ್ಲಿದ್ದ ಈ-ಹಾಸ್ಪಿಟಲ್ ಸಿಬ್ಬಂದಿಗೆ ವೇತನ ಸೆಳೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅನುಮೋದನೆ ಪಡೆಯಲು ಸೂಚಿಸಿದರು, ಹಾಗೇ ಸ್ವಚ್ಛತೆಗೆ ಹೆಚ್ಚು ಗಮನ ಹರಿಸುವಂತೆ ತಿಳಿಸಿದರು, ನಂತರ ಸಭೆಯಲ್ಲಿ ಅನುದಾನ ಬಳಕೆ ಅನುಮೋದನೆಗೆ ಒಪ್ಪಿಗೆ ನೀಡಿದರು,
ಈ ಸಭೆಯಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ತಾಲೂಕು ಆರೋಗ್ಯಾಧಿಕಾರಿ ಕುಶಾಲ್ ರಾಜ್, ಗ್ರಾಮ ಪಂಚಾಯತಿ ಹಾಗು ಸಮಿತಿ ಸದಸ್ಯರಾದ ಹೆಚ್.ಹನುಮಂತ, ರವಿ, ಡಾ.ಸುನಿತಾ, ಡಾ.ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಕಛೇರಿ ಅಧೀಕ್ಷಕ ಹರೀಶ್,ಅನ್ಸಾರಿ, ಮಂಜುನಾಥ್,ಶಕೀಲ್ ಅಹಮದ್, ಗ್ರಾಮದ ಮುಖಂಡರಾದ ಉಡೇದ ಸುರೇಶ, ಪಾಲಾಕ್ಷಗೌಡ, ಶಶಿಧರ್,ನಿಜಾಮುದ್ದೀನ್, ನಾಗರತ್ನ, ಇತರರು ಉಪಸ್ಥಿತರಿದ್ದರು.