ರಕ್ಷಾಬಂಧನವೆಂಬುದು ಅಣ್ಣ ತಂಗಿಯ ಜೀವನದ ಪ್ರೀತಿಯ ಪವಿತ್ರ ಬೆಸುಗೆ: ಶಿವರಾಜ್ ಕನ್ನಡಿಗ

0
215

ಕೊಟ್ಟೂರು:ಆಗಸ್ಟ್:12:-
ರಕ್ಷಾಬಂಧನವೆಂಬುವುದು ಕೇವಲ ಒಂದು ದಾರವಲ್ಲ, ಒಡಹುಟ್ಟಿದವರ ನಡುವಿನ ಅವಿನಾಭಾವ ಬಂದಧ ಸಂಬಂಧವನ್ನು ಸೂಚಿಸುವ ಪವಿತ್ರ ದಾರ. ಅಣ್ಣ ತಂಗಿ ಜೀವನದ ನಡುವಿನ ಪರಸ್ಪರ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ಅದು ರಕ್ಷಾ ಬಂಧನ.ರಕ್ಷೆ ಎಂಬುದು ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಬೆಸುಗೆಯ ಸಂಕೇತವನ್ನು ಸೂಚಿಸುತ್ತದೆ.

ಈ ದಿನ ಸಹೋದರನ ಹಣೆಯ ಮೇಲೆ ಸಹೋದರಿ ತಿಲಕವನ್ನು ಹಚ್ಚಿ ತನ್ನನ್ನು ಸಮಾಜದ ಕೆಟ್ಟ ಕಣ್ಣುಗಳಿಂದ, ದುಷ್ಟಶಕ್ತಿಗಳಿಂದ ರಕ್ಷಿಸೆಂದು ಶುದ್ಧ ಮನಸ್ಸಿನಿಂದ, ಪ್ರೀತಿಯಿಂದ,ಸಹೋದರನ ಕೈಯಿಗೆ ರಕ್ಷಾಸೂತ್ರವನ್ನು ಕಟ್ಟಿ,ಆರತಿ ಮಾಡಿ ಸಹೋದರನ ಆಶೀರ್ವಾದವನ್ನು ಪಡೆದು,ಸಹೋದರನಿಂದ ಪ್ರೀತಿಯ ಉಡುಗೊರೆಯನ್ನು ಪಡೆಯುತ್ತಾಳೆ.ಈ ನಿಷ್ಕಲ್ಮಶ ಮನಸ್ಸಿನಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟವಾದ ಅರ್ಥವಿರುವುದರಿಂದ ಇದು ಪರಸ್ಪರ ಭಾತೃತ್ವದ ಭಾವನೆಯನ್ನು ದಟ್ಟಗೊಳಿಸಿಸುತ್ತದೆ

ರಾಖಿಹಬ್ಬ ಬೆಳೆದುಬಂದ ಹಿನ್ನಲೆ:
ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣನ ಮಣಿಕಟ್ಟಿನಿಂದ ರಕ್ತಸ್ತ್ರಾವವಾಗುವುದನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನ ಮಣಿಕಟ್ಟಿನ ರಕ್ತಸ್ತ್ರಾವವನ್ನು ತಡೆಹಿಡಿಯುವನಂತೆ ಕಟ್ಟಿದಳು.ಈ ವೇಳೆ ದ್ರೌಪದಿಯ ವಾತ್ಸಲ್ಯ,ಕಾಳಜಿಯನ್ನು ಕಂಡ ಕೃಷ್ಣ ಆಕೆಯನ್ನು ಸಹೋದರನ ಸ್ಥಾನದಲ್ಲಿ ನಿಂತು ರಕ್ಷಣೆ ಮಾಡುವ ಭರವಸೆ ನೀಡಿದನು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here