ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗುರುಭವನದಲ್ಲಿ 32ನೇ ವರ್ಷದ ವಿನಾಯಕ ಪ್ರತಿಷ್ಠಾಪನಾ ಮಹೋತ್ಸವ

0
222

ವಿಜಯನಗರ:ಸೆ:11:- ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ರಾಮನಗರ (ನಾಣಿಕೆರಿ) ಇವರಿಂದ ಗುರುಭವನದಲ್ಲಿ ಸರಳ ರೀತಿಯಲ್ಲಿ 32ನೇ ವರ್ಷದ ಶ್ರೀವಿನಾಯಕ ಪ್ರತಿಷ್ಠಾಪನಾ ಮಹೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.

ಬೆಳಿಗ್ಗೆ ಪಟ್ಟಣದ ಕೂಡ್ಲಿಗಿ ಸರ್ಕಲ್ ನಲ್ಲಿ ಪೆಂಟರ್ ಸುರೇಶ ಮನೆಯಿಂದ ಗಣಪತಿಯನ್ನು ಕ್ಲಬ್ ನ ಸದಸ್ಯರು ಪೂಜೆ ಮೂಲಕ ಗುರುಭವನಕ್ಕೆ ತಂದರು. ಬೆಳಿಗ್ಗೆ 10 ಗಂಟೆಯಿಂದ 10.30ರ ತನಕ ಚಂದ್ರಶೇಖರ ಭಟ್ಟರ ಸಾನಿಧ್ಯದಲ್ಲಿ ಗಣಪತಿ ಪ್ರತಿಷ್ಠಾಪನೆ ಪೂಜ ಕಾರ್ಯನೇರವೇರಿತು.

ಈ ಸಂದರ್ಭದಲ್ಲಿ ಕೊರೊನಾ ಮೂರನೇಯ ಆಲೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಮಾರ್ಗಸೂಚಿ ಅನ್ವಯದಂತೆ ಅತ್ಯಂತ ಸರಳ ರೀತಿಯಲ್ಲಿ ಈ ಸಲ ಗಣಪತಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಭಕ್ತರು ಮಾಸ್ಕಧಾರಿಗಳಾಗಿ ಬಂದು ಸಾಮಾಜಿಕ ಅಂತರದೊಂದಿಗೆ ಗಣಪತಿ ದರ್ಶನವನ್ನು ಪಡೆದುಕೊಳ್ಳಲು ತಮ್ಮಲ್ಲಿ ವಿನಂತಿಸಲಾಗಿದ್ದು. ಸರ್ವರೂ ಕೊರೊನಾ ನಿಯಂತ್ರಣಕ್ಕೆ ಶ್ರಮಿಸೋಣ ಎಂದು ಸಂಘಟಕರು ಪೂಜಾ ಕಾರ್ಯಕ್ಕೆ ಆಗಮಿಸಿದ ಭಕ್ತರಲ್ಲಿ ಮನವಿ ಮಾಡಿಕೊಂಡರು.

ಕ್ಲಬ್ ನ ಅಧ್ಯಕ್ಷ ಹೆಚ್.ಪಿ.ಶಿವಶಂಕರಗೌಡ, ಕಾರ್ಯದರ್ಶಿ ಹುಳ್ಳಿಪ್ರಕಾಶ, ಖಜಾಂಚಿ ಬಾರಿಕರ ಗಂಗಾಧರ, ಪುರಸಭೆ ಮಾಜಿ ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಮಾಜಿ ಗ್ರಾಪಂ ಸದಸ್ಯ ಬಾರಿಕರ ನಿಂಗಪ್ಪ , ಕ್ಲಬ್ ನ ಹಿರಿಯ ಸದಸ್ಯರಾದ ಬಡಿಗೆರ ಬಸವರಾಜ, ಜಿಎಂ ಶಂಕರ, ಪ್ಲಂಬರ್ ಮಾರುತಿ, ಮೇದಾರ ಪಕ್ಕಿರಪ್ಪ, ಬಿಹೆಚ್ಎಂ ಗುರು, ಕೋಟಿ, ಹರ್ಷ, ಶಿವು, ನೂರಿ, ಮುನುಗ, ಸಂತು, ಪ್ರದೀಪ್, ಗಂಗಾ ಸೇರಿದ್ದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here