ಸಂಡೂರು: ಸೆ: 5: ಅತಿ ವಿಶ್ವಾಸರ್ಹ ಬ್ಯಾಂಕ್ ಅಗಿ ಕಾರ್ಯನಿರ್ವಹಿಸುತ್ತಿರುವ ಸಂಡೂರು ಪಟ್ಟಣ ಸಹಕಾರಿ ಸೌಹಾರ್ದ ಬ್ಯಾಂಕ್ ಮಹಾರಾಷ್ಟ್ರದ ಕೊಲ್ಲಾಪುರದ ಎ.ವಿ.ಎಸ್. ಪಬ್ಲಿಕೇಷನ್ ಸಂಸ್ಥೆ ನೀಡುವ ಬ್ಯಾನಕೋ ಬ್ಲೂ ರಿಬ್ಬನ್-2020ಕ್ಕೆ ನೀಡುವ ಪ್ರಶಸ್ತಿಗೆ ಭಾಜನವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ವಿ.ಎಸ್. ಪಬ್ಲಿಕೇಷನ್ ಅವಿನಾಶ್ ಗುಂಡಾಲೇ ಅವರು ಈ ಬಗ್ಗೆ ಮಾಹಿತಿ ನೀಡಿ ಸೌಹಾರ್ದ ಬ್ಯಾಂಕುಗಳ ಕಾರ್ಯ ಮತ್ತು ಹಣಕಾಸು, ಆಡಳಿತ, ತಾಂತ್ರಿಕತೆ ಅಳವಡಿಕೆಯಲ್ಲಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ, ಈ ಬಾರಿ ತಾಲೂಕು ಕೇಂದ್ರದಲ್ಲಿಯೇ ಇಂತಹ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಯಾವುದೇ ನಷ್ಟವಿಲ್ಲದೆ ಉತ್ತಮ ಸಾಧನೆ ಮಾಡಿದ ಸಹಕಾರಿ ಬ್ಯಾಂಕ್ ಎಸ್.ಪಿ.ಎಸ್. ಬ್ಯಾಂಕ್ ಅಗಿದ್ದು ಅದನ್ನು ಆಯ್ಕೆಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ಮಹಾರಾಷ್ಟ್ರದ ಕೊಲ್ಲಾಪುರದ ಸಂಸ್ಥೆ ರಾಜ್ಯದ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಬ್ಯಾಂಕುಗಳನ್ನು ಗುರುತಿಸಲಾಗಿದೆ ಎಂದರು.
ಈ ಬ್ಯಾಂಕು 2018-19 ಹಾಗೂ 2019-20ನೇ ಸಾಲಿನಲ್ಲಿ ಬ್ಯಾಂಕಿನ ಹಣಕಾಸಿನ ಪ್ರಗತಿ ಸಾಧನೆಗೆ ಗೌರವ ಇದಾಗಿದೆ. ಸಮಾರಂಭದಲ್ಲಿ ಕೊಡಗು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ.ರವಿಶಂಕರ್, ನಿರ್ದೇಶಕರಾದ ಅಂಕುಮನಾಳ್ ಸಿದ್ದಪ್ಪ, ಎವಿಎಸ್ ಪಬ್ಲಿಕೇಷನ್ ಸಂಸ್ಥೆಯ ಅವಿನಾಶ್ ಗುಂಡಾಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ನಾಗರಾಜ ಅವರು ಈ ಸಾಧನೆಗೆ ಸಿಬ್ಬಂದಿ ಹಾಗೂ ವ್ಯವಸ್ಥಾಪಕರನ್ನು ಅಭಿನಂದಿಸಿದರು.