ಜನವರಿ ೨೩ ರಂದು ರಾಷ್ಟಿçಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಡಾ: ರಾಕೇಶ್ ಕುಮಾರ್ ಕೆ

0
65

ರಾಮನಗರ ಡಿ. 27 : ಜಿಲ್ಲೆಯಲ್ಲಿ ಜನವರಿ 23 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಪ್ಪದೇ 5 ವರ್ಷದೊಳಗಿನ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಚನ್ನಪಟ್ಟಣ-೨೭೭೯೭೧, ಕನಕಪುರ-೩೬೭೯೨೧, ಮಾಗಡಿ-೨೧೬೨೮೯ ಹಾಗೂ ರಾಮನಗರ-೩೦೮೬೭೫ ಸೇರಿದಂತೆ ಒಟ್ಟು ೮೦೪೯೩ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ೫೫೦ ಲಸಿಕಾ ಕೇಂದ್ರಗಳು, ೨೮ ಟ್ರಾö್ಯಸಿಟ್ ತಂಡ, ೨೪ ಮೊಬೈಲ್ ಟೀಮ್, ೨೨೯೨ ವ್ಯಾಕ್ಸಿನೇಟರ್ ಹಾಗೂ ೧೨೦ ಸೂಪರ್‌ವೈಸರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಜನವರಿ ೨೩ ರಂದು ಬೂತ್‌ಗಳಲ್ಲಿ, ಜನವರಿ ೨೪ ಹಾಗೂ ೨೫ ರಂದು ಗ್ರಾಮೀಣ ಪ್ರದೇಶ ಹಾಗೂ ಜನವರಿ ೨೪ ರಿಂದ ೨೬ ವರೆಗೆ ನಗರ ಪ್ರದೇಶದ ಮನೆ- ಮನೆ ಭೇಟಿ ಮೂಲಕ ಬೂತ್‌ಗಳಲ್ಲಿ ಲಸಿಕೆ ಪಡೆಯದೆ ಇರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದAತೆ ನೋಡಿಕೊಳ್ಳಬೇಕು. ಇದಕ್ಕಾಗಿ ಯೋಜನೆ ಸಿದ್ಧಪಡಸಿ ಲಸಿಕಾ ಕಾರ್ಯಕ್ಕೆ ನಿಯೋಜನೆಯಾಗುವ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ತಿಳಿಸಿದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ಇಟ್ಟಿಗೆ ಉತ್ಪದನಾ ಘಟಕ, ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ತಪ್ಪದೇ ಲಸಿಕೆಯನ್ನು ಮಕ್ಕಳಿಗೆ ನೀಡಿ. ಕಾರ್ಮಿಕ ಅಧಿಕಾರಿಗಳು ಸ್ಥಳಗಳನ್ನು ಗುರುತಿಸಿ ಲಸಿಕಾ ಕೆಲಸ ಸಂಘಟಿಸುವAತೆ ತಿಳಿಸಿದರು.

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ತಾಯಾಂದಿರಿಗೆ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ನೀಡಲು ಸಹಕರಿಸಬೇಕು. ಲಸಿಕೆ ನೀಡುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದರು.

ಬೆಸ್ಕಾA ಅವರು ಲಸಿಕೆ ಸಂಗ್ರಾಹಣೆಗೆ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಲಸಿಕೆ ಕಾರ್ಯಕ್ರಮಕ್ಕೆ ಅಂದಾಜು ೧೦೧ ವಾಹನದ ಅವಶ್ಯಕತೆ ಇದ್ದು, ವಾಹನಗಳ ವ್ಯವಸ್ಥೆ ಮಾಡಬೇಕು. ವಾಹನವು ಜನವರಿ ೨೨ ರಂದು ಆರೋಗ್ಯ ಇಲಾಖೆ ಅವರು ತಿಳಿಸುವ ಸ್ಥಳಗಳಲ್ಲಿ ವರದಿಯಾಗಬೇಕು ಎಂದರು.

ಆರ್.ಸಿ.ಹೆಚ್. ಅಧಿಕಾರಿ ಡಾ: ಪದ್ಮ ಅವರು ಮಾತನಾಡಿ ಕಳೆದ ಸಾಲಿನಲ್ಲಿ ೮೦೩೪೮ ಮಕ್ಕಳಿಗೆ ಲಸಿಕೆ ನೀಡಲು ಗುರಿ ನಿಗಧಿಪಡಿಸಲಾಗಿತ್ತು. ೮೫೦೮೯ ಮಕ್ಕಳಿಗೆ ಲಸಿಕೆ ನೀಡಿ ೧೦೬% ಸಾಧನೆ ಮಾಡಲಾಗಿದೆ.ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಲಸಿಕೆ ಪಡೆದ ನಂತರ ಯಾವುದೇ ಮಗುವಿನಲ್ಲಿ ಅಡ್ಡಪರಿಣಾಮ ವರದಿಯಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಡಿ.ಟಿ.ಒ ಡಾ: ಕುಮಾರ್, ಡಿಎಸ್.ಓ ಡಾ: ಕಿರಣ್, ಡಿಎಲ್‌ಒ ಡಾ: ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್ ಸಿ.ವಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here