ವಿಶ್ವ ಮಲೇರಿಯಾ ದಿನ ಆಚರಣೆ

0
703

ಸಂಡೂರು: ಎ:25: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ “ವಿಶ್ವ ಮಲೇರಿಯಾ ದಿನ-2022″ರ ಆಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ, ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್ ಕ್ಯಾಂಪ್ ನಲ್ಲಿ ವಿಶ್ವ ಮಲೇರಿಯಾ ದಿನ ಆಚರಿಸಿ ಸಾರ್ವಜನಿಕರಿಗೆ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಲಾಯಿತು,

ಕಾರ್ಯಕ್ರಮ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 2007 ರಿಂದ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತಿದೆ, ಮಲೇರಿಯಾ ನಿಯಂತ್ರಣ ಸಾಧಿಸಲು ಎಲ್ಲಾ ರೀತಿಯಿಂದಲೂ ಇಲಾಖೆ ಶ್ರಮಿಸುತ್ತಿದೆ, 2030 ಕ್ಕೆ ಶೂನ್ಯ ಮಲೇರಿಯಾ ರಾಷ್ಟ್ರವಾಗಿಸಲು ಪಣ ತೊಟ್ಟಿದೆ, ತೋರಣಗಲ್ಲು ವ್ಯಾಪ್ತಿಯಲ್ಲಿ ಕಳೆದ ತಿಂಗಳಲ್ಲಿ ಒಳಾಂಗಣ ಕೀಟನಾಶಕ ದ್ರಾವಣ ಸಿಂಪಡಿಸಲಾಗಿದೆ, ನೀರಿನ ತೊಟ್ಟಿ, ನಿಂತ ನೀರಿನಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದೆ, ಆಧ್ಯತೆ ಮೇರೆಗೆ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಗಿದೆ, ಹಾಗೆ ಎಲ್ಲಾ ಕಡೆಯೂ ಜಾಗೃತಿ ಕಾರ್ಯ ಕೈಗೊಂಡಿದೆ, ಉದ್ಯೋಗ ಅರಸಿ ಬರುವ ವಲಿಸಿಗರ ಮೇಲೂ ಕಣ್ಗಾವಲು ಇಟ್ಟಿದೆ, ಯಾರಿಗೆಯಾಗಲಿ ಜ್ವರ ,ಚಳಿ, ತಲೆನೋವು, ಬೆವರು, ಬಿಟ್ಟು ಬಿಟ್ಟು ಜ್ವರ ಬರುವುದು ಕಂಡೊಡನೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಲೇರಿಯಾ ಎಂದು ದೃಡಪಟ್ಟರೆ 4 ರಿಂದ 14 ದಿನಗಳ ಪೂರ್ಣ ಚಿಕಿತ್ಸೆ ಪಡೆಯಬೇಕು, ಮೊದಲಿನಂತೆ ಹೆಚ್ಚು ಪ್ರಕರಣಗಳು ಇರದಿದ್ದರೂ ಈ ವರ್ಷದ ಘೋಷ ವಾಕ್ಯದಂತೆ ಮಲೇರಿಯಾ ನಿಯಂತ್ರಣಕ್ಕೆ “ನವೀನ ವಿಧಾನಗಳನ್ನು ಬಳಸೋಣ- ಮಲೇರಿಯಾ ಕಡಿಮೆಮಾಡಿ ಜೀವಗಳನ್ನು ಉಳಿಸೋಣ” ಎಂಬ ವಾಕ್ಯದ ಅಡಿಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ, ಪ್ರತಿಯೊಬ್ಬರೂ ಶೂನ್ಯ ಮಲೇರಿಯಾ ದೇಶ ವಾಗಿಸಲು ಶ್ರಮಿಸಬೇಕಿದೆ, ಸ್ವಯಂ ರಕ್ಷಣೆ ವಿಧಾನಗಳಾದ ಮಸ್ಕಿಟೋ ಕಾಯಿಲ್ ಬಳಸುವುದು, ಕ್ರೀಮ್ ಗಳ ಲೇಪನ, ಮನೆಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸುವುದು, ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಸ್ವಚ್ಛವಾಗಿಡುವುದು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವುದು, ಮೈತುಂಬ ಬಟ್ಟೆ ಧರಿಸುವುದು, ಸಂಜೆ ವೇಳೆ ಬಾಗಿಲು,ಕಿಟಿಕಿಗಳಿಗೆ ಕರ್ಟನ್ ಹಾಕುವುದು, ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಮಾಡಿದಲ್ಲಿ ಮಲೇರಿಯಾ ನಿಯಂತ್ರಣ ಸಾಧ್ಯವಿದೆ ಎಂದು ಅವರು ತಿಳಿಸಿದರು,ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸೊಳ್ಳೆ ನಿಯಂತ್ರಣದ ಕರಪತ್ರಗಳನ್ನು ವಿತರಣೆ ಮಾಡಲಾಯಿತು,

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಶಕೀಲ್ ಅಹಮದ್, ನಿಜಾಮುದ್ದಿನ್,ಆಶಾ ಕಾರ್ಯಕರ್ತೆ ರಾಜೇಶ್ವರಿ, ಹುಲಿಗೆಮ್ಮ,ಆಶಾ, ಶ್ರೀದೇವಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here