ತೋರಣಗಲ್ಲುನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ; ತಾಯಿಯ ಹಾಲು ಎಲ್ಲದಕ್ಕಿಂತ ಶ್ರೇಷ್ಠ: ಡಾ.ವೆಂಕಟೇಶ್

0
167

ತಾಯಿಯ ಹಾಲು ಎಲ್ಲವುದಕ್ಕಿಂತ ಶ್ರೇಷ್ಠ ಡಾ.ವೆಂಕಟೇಶ್, ತೋರಣಗಲ್ಲು ಗ್ರಾಮದಲ್ಲಿ “ವಿಶ್ವ ಸ್ತನ್ಯ ಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಮಾತಾನಾಡಿದ ಡಾ.ವೆಂಕಟೇಶ್ ಶಿಶು ಜನಿಸಿದ ಅರ್ಧ ಗಂಟೆಯೊಳಗೆ ಕೊಡುವ ಎದೆಹಾಲು ಕೊಲೆಸ್ಟ್ರೆಮ್ ಯುಕ್ತವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ , ಶಿಶುವಿಗೆ ಆರು ತಿಂಗಳ ವರೆಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡುವ ಅವಶ್ಯಕತೆ ಇಲ್ಲ, ಎಷ್ಟೇ ಬಿಸಿಲಿರಲಿ ನೀರು ಸಹ ಕೊಡಬೇಡಿ ಯಾವುದೇ ಸಮಯದಲ್ಲಾಗಲಿ ಹತ್ತರಿಂದ ಹದಿಮೂರು ಬಾರಿ ತಾಯಿ ಎದೆ ಹಾಲು ಕೊಡ ಬೇಕು, ಕೆಲವರು ಜೇನು, ಔಡಲ ಎಣ್ಣೆ ಹಾಕುವುದು ಬಿಡಬೇಕು, ಎದೆ ಹಾಲು ಕೊಡುವುದರಿಂದ ಶಿಶುಗಳಿಗೆ ಜೀರ್ಣಿಸಲು ಸುಲಭವಿದ್ದು, ಮಲಬದ್ಧತೆ ದಂತಹ ಸಮಸ್ಯೆಗಳನ್ನು ತಡೆಗಟ್ಟತ್ತದೆ,ಆರು ತಿಂಗಳ ನಂತರ ಎರಡು ವರ್ಷಗಳ ವರೆಗೆ ಪೂರಕ ಆಹಾರದೊಂದಿಗೆ ಎದೆಹಾಲು ಕಡ್ಡಾಯವಾಗಿ ಕೊಡಲೇಬೇಕು ಎಂದು ತಿಳಿಸಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪ್ರತಿ ವರ್ಷವೂ ವಿಶ್ವ ಸ್ತನ್ಯ ಪಾನ ಸಪ್ತಾಹವನ್ನು 120 ದೇಶಗಳು ಆಚರಿಸಿ ಎದೆ ಹಾಲಿನ ಮಹತ್ವ ತಿಳಿಸುವ ಸಲುವಾಗಿ ಆಗಸ್ಟ್ ಒಂದ ರಿಂದ ಏಳರವರೆಗೆ ತಾಯಂದಿರಿಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು, ಉದ್ಯೋಗಸ್ಥ ಮಹಿಳೆಯರು ಮಕ್ಕಳಿಗೆ ಎದೆ ಹಾಲು ಕೊಡಲು ಸಮಯ ನಿಗದಿ ಪಡಿಸಿಕೊಂಡು ಹಾಲುಕೊಡಬೇಕು,
ಕೃತಕ ಹಾಲು ಕೊಡುವುದರಿಂದ ಮಕ್ಕಳಿಗೆ ಅತಿಸಾರ ಬೇದಿ, ನ್ಯುಮೋನಿಯಾ ದಂತಹ ಸಮಸ್ಯೆಗಳಿಗೆ ತುತ್ತಾಗುತ್ತವೆ, ಶಿಶು ಮರಣಕ್ಕೂ ಕಾರಣವಾಗುತ್ತದೆ, ತಾಯಿ ಎದೆ ಹಾಲು ಕೊಡುವುದರಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ,‌ ಶಿಶು ಲವಲವಿಕೆಯಿಂದ ಇರುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಡಾ. ದೀಪಾ ಪಾಟೀಲ್, ಡಾ.ವೆಂಕಟೇಶ್, ಡಾ, ಆಯಿಶಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಹುಲಿಗೆಮ್ಮ, ಗೀತಾ, ಆಶಾ ಫೆಸಿಲಿಟೇಟರ್ ಬಸಮ್ಮ, ಟಿ.ಬಿ ಮೇಲ್ವಿಚಾರಕಿ ಆಶಾ, ನೀಲಮ್ಮ, ತಿಮ್ಮಕ್ಕ, ಲಕ್ಷ್ಮಿ ಇತರರು ಭಾಗವಹಿಸಿದ್ದರು.

ವರದಿ:-ರಾಜು ಪಾಳೆಗಾರ್

LEAVE A REPLY

Please enter your comment!
Please enter your name here