ಸಂಡೂರು:ಸೆ:17: ಬಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ 71ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ, ಸೇವೆ ಮತ್ತು ಸಮರ್ಪಣಾ ಅಭಿಯಾನ ಮುಖಾಂತರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ವಡ್ಡು ಗ್ರಾಮದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಯುವ ಮೋರ್ಚಾ ಘಟಕ ಸಂಡೂರು ಹಾಗೂ ವಿಮ್ಸ್ ರಕ್ತದಾನ ಬಂಡಾರ ಬಳ್ಳಾರಿ ಹಾಗೂ ಸಂಡೂರು ಸಂಯುಕ್ತ ಆಶ್ರಯದ ಸಹಯೋಗದೊಂದಿಗೆ ಇಂದು ನಡೆದ ರಕ್ತದಾನ ಶಿಬಿರದಲ್ಲಿ ಬಹಳ ಜನ ಭಾಗವಹಿಸಿ ರಕ್ತದಾನ ಮಹಾದಾನ ಎಂದು ತಿಳಿದು ನಮ್ಮ ನಿಮ್ಮೆಲ್ಲರ ಸ್ನೇಹಿತ ಹಾಗೂ ಬಂಧು ಮಿತ್ರರು ಬಂದು ರಕ್ತದಾನ ಮಾಡಿದ್ದಾರೆ,
ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಚಿಕ್ಕ ಅಳಿಲು ಸೇವೆಗೆ ಸಹಕರಿಸಿದ ತಾಳೂರು ಹಾಗೂ ವಡ್ಡು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು/ತಾಲೂಕು ಪಂಚಾಯಿತಿಯ ಸದಸ್ಯರು ಹಾಗೂ ಊರಿನ ಹಿರಿಯರು ಮತ್ತು ಯುವ ಮೋರ್ಚಾ ಘಟಕದ ಎಲ್ಲಾ ಸ್ನೇಹಿತರಿಗೂ ಹಾಗೂ ಬಿಜೆಪಿಯ ಸಂಡೂರು ಮಂಡಲದ ಹಾಗೂ ಬಳ್ಳಾರಿಯ ಎಲ್ಲಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ತುಂಬು ಹೃದಯದ ಧನ್ಯವಾದಗಳು…
ಸಂಡೂರು ತಾಲೂಕು ಬಿಜೆಪಿ ಮಂಡಲದ
ಕೆ.ತಿಪ್ಪೇಸ್ವಾಮಿ (ತಾಳೂರು)
ಬಿಜೆಪಿ ಮಾಧ್ಯಮ ಪ್ರಮುಖ್ ಸಂಡೂರು ಮಂಡಲ.ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ