ಸಿಂಧನೂರು ನಗರದ ಕಾರುಣ್ಯ ನೆಲೆವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದ ವೃದ್ಧರಿಗೆ, ವಿಶೇಷ ಚೇತನರಿಗೆ ನಗರದ ನವೀನ್ ಡೆಂಟಲ್ ಕೇರ್ ವೈದ್ಯ ಡಾ.ನವಿನ್ ಉಚಿತವಾಗಿ ದಂತ ತಪಾಸಣೆ ಮತ್ತು ಉಚಿತವಾಗಿ ಜೌಷಧಿಗಳನ್ನು ಪ್ರತಿ ತಿಂಗಳು ವಿತರಿಸುತಿದ್ದಾರೆ.
ವೈದ್ಯರ ಸೇವೆಯಿಂದ ವೃದ್ಧರಿಗೆ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿರುವುದು ತುಂಬಾ ಸಂತೋಷ ಆಗುತ್ತಿದೆ ಎಂದು ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹಿರೇಮಠ ಹರೇಟನೂರು ಅವರ ತಿಳಿಸಿದ್ದಾರೆ.
ನಂತರ ಮಾತನಾಡಿದ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ಅವರು ರವಿವಾರ ಬಂದರೆ ರಿಲ್ಯಾಕ್ಸ್ ಆಗಬೇಕು ಎನ್ನುವವರ ಮಧ್ಯೆ ಇಲ್ಲೊಬ್ಬ ವೈದ್ಯರು ವೃದ್ಧಾಶ್ರಮದಲ್ಲಿ ಅನಾಥ ವೃದ್ದರಿಗೆ ಉಚಿತವಾಗಿ ದಂತ ತಪಾಸಣೆ ಮಾಡಿ ಚಿಕಿತ್ಸೆ ಮಾಡುವ ಭರವಸೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ವರದಿ: ಅವಿನಾಶ್ ದೇಶಪಾಂಡೆ✍️