ಕೊಪ್ಪಳ:ಸೆ:18: ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ವತಿಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ವಿರುಪಾಪುರ 31ನೇ ವಾರ್ಡ್ ನಲ್ಲಿ 17.09.2021 ಶುಕ್ರವಾರ ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾರತೀಯಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಈರಮ್ಮ ಆರ್. ಅವರು ವಹಿಸಿಕೊಂಡಿದ್ದರು
ಈ ಕಾರ್ಯಕ್ರಮದಲ್ಲಿ 31 ನೇ ವಾರ್ಡ್ ನ ಎಲ್ಲಾ ಮಹಿಳೆಯರು ಬಾಗವಹಿಸಿದ್ದರು ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು,ತಾಹಿರಬಾನು,ಜರೀನಾ, ಈರಮ್ಮ, ಮೋತಿಬಾಯಿ, ಸರೋಜಮ್ಮ, ಮತ್ತು ಸ್ಥಳೀಯವಾಗಿ ಎಲ್ಲಾ ಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಯಾಗಿ ಕಲ್ಯಾಣ ಕರ್ನಾಟಕದ ದಿನಾಚರಣೆಯನ್ನು ನಡೆಸಿಕೊಟ್ಟರು