ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 11ನೇವಾರ್ಡ್ ಕೋಟೆಯಲ್ಲಿ,ಮಳೆ ಕೊಂತೆಮ್ಮಪೂಜೆ ಎಂಬ ಮಳೆಗಾಗಿ ವಿಶೇಷ ಪೂಜಾ ಕೈಂಕರ್ಯಗಳನ್ಹು ಆಚರಿಸಲಾಯಿತು.ಮಳೆಕೊಂತಮ್ಮ ಪೂಜೆ ಮಾಡೋ ಮೂಲಕ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು.
ವಿವಿದ ಧಾರ್ಮಿಕ ನಗರದ ಪ್ರಮುಖಕರು ಹಾಗೂ ಐದು ಜನ ಮುತ್ತೈದೆಯರು, ಮತ್ತು ಐದು ಕುಮಾರಿಯರು ಒಳಗೊಂಡಂತೆ ವಿಶಿಷ್ಟ ಆಚರಣೆಯೊಂದಿಗೆ ದೈವಸ್ಥರು ಹಾಗೂ ಹಿರಿಯರು, ಮಹಿಳೆಯರು ಸೇರಿ ಮಳೆ ಕೊಂತೆಮ್ಮ ವಿಶಿಷ್ಟ ಪೂಜೆ ಮಾಡುತ್ತಾರೆ.
ಮಕ್ಕಳು ಹಾಗೂ ಕುಮಾರಿಯರು ವಿವಿದ ಪದಾಧಿಕಾರಿಗಳು,ರೈತರು ಮತ್ತು ಮಹಿಳೆಯರು ಧಾರ್ಮಿಕಾ ಚರಣೆಯಲ್ಲಿ ಭಾಗವಹಿಸಿದ್ದರು. ಇದೊಂದು ಸಾಂಪ್ರದಾಯಿಕ ಪೂಜಾವಿಧಿಯಾಗಿದ್ದು, ಸಕಾಲಕ್ಕೆ ಮಳೆ ಬಾರದ ಸಂದರ್ಭದಲ್ಲಿ ಈ ಆಚರಣೆ ಮಾಡೋ ಮೂಲಕ ಮಳೆ ಬರುವಿಕೆ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಗುವುದು ಎಂದು, ಹಿರಿಯ ನಾಗರೀಕರು ಹಾಗೂ ನಿವೃತ್ತ ಮುಖ್ಯಶಿಕ್ಷಕಿ ಯು.ಲಕ್ಷ್ಮೀದೇವಿಯವರು ತಿಳಿಸಿದ್ದಾರೆ.
ವರದಿ:-ಮಂಜುನಾಥ್